ವಿಟ್ಯಾಮಿನ್ ಭರಿತ ಚಹಾ!

ವಿಟ್ಯಾಮಿನ್ ಭರಿತ ಚಹಾ!

ದಿನನಿತ್ಯ ಸೇವಿಸುವ ಪಾನಿಯಗಳಲ್ಲಿ ವಿಟ್ಯಾಮಿನ್‌ಗಳು ಸಮೃದ್ಧವಾಗಿ ಸಿಗುತ್ತವೆ ಎಂದರೆ ಬೇಡವೆನ್ನುವರಾರು? ಕೋಟ್ಯಾಂತರ ಜನರಿಗೆ ಅಗತ್ಯವಿರುವ ಪೌಷ್ಟಿಕತೆಯನ್ನು ಒದಗಿಸುವ ಅತ್ಯಾಧುನಿಕ ತಾಂತ್ರಿಕ ಶೋಧನೆಯೊಂದು ಈ ರೀತಿ ‘ಚಹಾಪೇಯ’ವನ್ನು ತಯಾರಿಸುತ್ತಲಿದೆ.

ದೇಶದ ಅತಿದೊಡ್ಡ ಪ್ಯಾಕೆಟ್ ಟೀ ಕಂಪನಿ ಹಿಂದುಸ್ಥಾನ್ ಲಿವರ್ ಲಿಮಿಟೆಡ್ (H.L.L.) ಇದೀಗ ವಿಟಮಿನ್ ಎ, ಬಿ2 ಮತ್ತು ನಿಯಾಸಿನ್‌ಗಳನ್ನು ಸೇರಿಸಿ ಸಮೃಧಿಗೊಳಿಸಿದ (ಫೋರ್ಟಿಫೈಡ್) ಬ್ರೂಕ್‌ಬಾಂಡ್, ಎ1, ಪವರ್ ಎಂಬ ವಿಟಮಿನ್ ಭರಿತ ಟೀಯನ್ನು ಭಾರತಕ್ಕೆ ಪರಿಚಯಿಸಿದೆ.

ಈ ಟೀ ಅಪಾರವಾದ ನೈಸರ್ಗಿಕ ಆರೋಗ್ಯವನ್ನು ಹೊಂದಿದ್ದು ಬೇರೆ ಯಾವುದೇ ರುಚಿಯನ್ನೂ ನೀಡದೇ ಸಹಜವಾದ ರುಚಿಯನ್ನು ಹೊಂದಿದೆ. ಬ್ರೂಕ್‌ಬಾಂಡ್ ಎ1 ಪವರ್ ಟೀಯನ್ನು ದಿನಕ್ಕೆ ಐದು ಕಪ್ಪನ್ನು ಕುಡಿದರೆ ಶೇ. ೫೦ ರಷ್ಟು ವಿಟ್ಯಾಮಿನ್ ದೊರೆಯುತ್ತದೆ. ಭಾರತದ ಜನಸಂಖ್ಯೆಯಲ್ಲಿ ಶೇ.೫೦ ಕ್ಕೂ ಹೆಚ್ಚು ಜನರಲ್ಲಿ ವಿಟಾಮಿನ್ ಕೊರತೆ ಎದ್ದು ಕಾಣುತ್ತದೆ. ಪ್ರಾಯಶಃ ೧೦ ಜನ ಭಾರತೀಯರಲ್ಲಿ ಕನಿಷ್ಟ ೮ ಜನರಾದರೂ ಟೀ ಕುಡಿಯುವದರಿಂದ ಇವರಿಗೆ ಪೌಷ್ಟಿಕತೆ ಒದಗಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ ಈ ಪಾನಿಯವನ್ನು ಸಮೃದ್ಧಗೊಳಿಸುವುದಾಗಿದೆ. ಯಾವುದೇ ಮಾಲ್ವೆಡ್ ಪಾನೀಯದ ಒಂದು ಬಟ್ಟಲಿಗೆ ೬ ರೂ. ಆದರೆ ಎ1 ಪವರ್ ಟೀ ಬೆಲೆ ಸು.M 1.30 ರೂ. ಆಗಿರುವುದರಿಂದ ಎಲ್ಲರ ಕೈಗೆ ಎಟಕುತ್ತದೆ.

ಹಿಂದೂಸ್ಥಾನ್ ಲಿವರ್ ಸಂಶೋಧನಾ ಮತ್ತು ಪ್ರಗತಿಪರ ಕಾರ್ಯವಿಧಾನಗಳ ನಂತರ ಕರ್ನಾಟಕದಲಿ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಮತು ಪೌಷ್ಟಿಕತೆ (ಹೆಲ್ತ್ ಅಂಡ್ ನ್ಯೂಟ್ರಿನ್)ಯ ಕ್ಷೇತ್ರದಲ್ಲಿ ಸ್ವತಂತ್ರ ಸಂಸ್ಥೆಯಾಗಿರುವ ನ್ಯೂಟ್ರಿಷನ್ ಸಿಂಡಿಕೇಟ್ ಈ ಟೀ ಬ್ರಾಂಡನ್ನು ದೃಢೀಕರಿಸಿದೆ. ಈ ಸಂಸ್ಥೆಯ ಅಧ್ಯಕ್ಷರಾದ ಡಾ|| ಕಲ್ಯಾಣ ಬಾಗ್ಯಿಯವರು ಎ1 ಪವರ್ ಪರೀಕ್ಷೆಗೆ ಒಳಪಡಿಸಿದ ವರದಿಗಳನ್ನು ನೋಡಿ ಎ1 ಪವರ್‌ನ ೫ ಬಟ್ಟಲುಗಳು ದಿನಕ್ಕೆ ಅಗತ್ಯವಿರುವ ವಿಟಾಮಿನ್‌ಗಳಲ್ಲಿ ಶೇ. ೫೦ ರಷ್ಟು ಪೂರೈಸುತ್ತದೆಂದು ಹೇಳುತ್ತಾರೆ. ಭಾರತ ದಂತಹ ಜನನಿಬಿಡ ದೇಶದಲ್ಲಿ ಸೂಕ್ಷ್ಮ ಪೋಷಣೆಯ ಕೊರತೆಯನ್ನು ನೀಗಿಸುವ ಪರಿಹಾರೋಪಾಯವೆಂದರೆ ಸಮೃದ್ಧಗೊಳಿಸಿದ ಆಹಾರಗಳು, ಪಾನಿಯಗಳು ಎನ್ನಬಹುದು. ೧೯೯೫ರಲ್ಲಿಭಾರತವು ಅಂಗೀಕರಿಸಿದ ದಿ ನ್ಯಾಶನಲ್ ನ್ಯೂಟ್ರೀಷನ್ ಪ್ಲಾನ್ ಆಪ್ ಆಯಕ್ಷನ್‌ನಲಿ ಪೌಷ್ಟಿಕತೆಯ ಕೊರತೆ ವಿಶೇಷವಾಗಿ ಸೂಕ್ಷ್ಮಪೌಷ್ಟಿಕತೆಯನ್ನು ನಿರ್ಮೂಲನ ಮಾಡಿ ಪೌಷ್ಟಿಕ ಆಹಾರವನ್ನು ಉತ್ತೇಜಿಸಲು ಆಹಾರಗಳನ್ನು ಸಮೃದ್ಧಿಗೊಳಿಸಬೇಕೆಂದು ಹೇಳಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಪರಿಯೊಳನ್ನ ಜಾರುವನ್ನಾತಂಕ ತರವಲ್ಲವೆನ್ನುವಿರಾ ?
Next post ದೇವರು ವರವನು ಕೊಟ್ಟರೂ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys